ರಾಜ್ಯ ಯೋಜನಾ ನಿರ್ದೇಶಕರ ನುಡಿ
-ಎಸ್.ಸೆಲ್ವ ಕುಮಾರ್
ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವು ಪ್ರಾಥಮಿಕ ಶಿಕ್ಷಣ ಗುಣಮಟ್ಟವನ್ನು ಉತ್ತಮಪಡಿಸಲು ಕೇಂದ್ರ ಸರವು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾದ ಪ್ರಮುಖ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಶಿಕ್ಷಣದ ಗುಣಾತ್ಮಕ ಆಯಾಮಗಳಾದ ಸಾರ್ವತ್ರಿಕ ಶಾಲಾಲಭ್ಯತೆ, ಶಿಕ್ಷಕರು, ಶಿಕ್ಷಕರ ಸಿದ್ಧತೆ, ಶಿಕ್ಷಕರ ತರಬೇತಿ, ಶಾಲಾ ಪಠ್ಯವಸ್ತು, ಪಠ್ಯಕ್ರಮ ಮತ್ತು ಶೈಕ್ಷಣಿಕ ಸಂಪನ್ಮೂಲ ಸಾಮಗ್ರಿಗಳು, ಗುಣಾತ್ಮಕ, ಆವಿಷ್ಕೃತ ಕಾರ್ಯಕ್ರಮಗಳ ಅನುಷ್ಠಾನ, ಉಸ್ತುವಾರಿ ಮತ್ತು ಮೇಲ್ವಿಚಾರಣೆ ಒಳಗೊಂಡ ವಿವಿಧ ಕಾರ್ಯಚಟುವಟಿಕೆಗಳಿಗೆ ಒತ್ತು ನೀಡಲಾಗಿರುತ್ತದೆ. ಈ ಕಾರ್ಯಕ್ರಮದ ಪ್ರಮುಖ ಗುರಿಗಳಾದ ಸಾರ್ವತ್ರಿಕ ಶಾಲಾ ಅವಕಾಶ, ಸಾರ್ವತ್ರಿಕ ದಾಖಲಾತಿ, ಹಾಜರಾತಿ ಮತ್ತು ಉಳಿಯುವಿಕೆಯನ್ನು ಖಚಿತಪಡಿಸುವುದು ಹಾಗೂ ಸಾರ್ವತ್ರಿಕ ಕಲಿಕೆಯ ಸಾಧನೆ, ಹೆಣ್ಣುಮಕ್ಕಳು, ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರು ಮತ್ತು ಸಮನ್ವಯ ಶಿಕ್ಷಣಕ್ಕೆ ಪ್ರಥಮ ಆದ್ಯತೆಯೊಂದಿಗೆ ವಿನೂತನ ಕಾರ್ಯತಂತ್ರಗಳ ಮೂಲಕ ಯಶಸ್ಸು ಸಾಧಿಸಲು ಪ್ರಯತ್ನಿಸಲಾಗುತ್ತಿದೆ.
ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ ಅನುಷ್ಠಾನ ಮತ್ತು ಪ್ರಗತಿಯನ್ನು ಕುರಿತಂತೆ ನಿಯತಕಾಲಿಕವಾಗಿ ವಿವಿಧ ಹಂತಗಳಲ್ಲಿ ಉಸ್ತುವಾರಿ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸಿ, ಅಗತ್ಯ ಅನುಪಾಲನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಗಳ
ಸಂಪೂರ್ಣ ಯಶಸ್ಸಿಗೆ ಹಾಗೂ ಗುಣಾತ್ಮಕ ಶಿಕ್ಷಣದ ಗುರಿ ಸಾಧನೆಗೆ ಶಿಕ್ಷಕರು, ಸಮುದಾಯ, ಇತರೆ ಇಲಾಖೆಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು, ಸೇರಿದಂತೆ ಎಲ್ಲಾ ಭಾಗಿದಾರರುಗಳ ಸಹಕಾರ, ಪರಿಶ್ರಮ ಅತ್ಯಗತ್ಯ.
*ಶಾಲೆಯಿಂದ ಹೊರಗುಳಿದ 6-14 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವುದು. ಈ ಕುರಿತು ಎನ್.ಜಿ.ಓ.ಗಳ ಸಹಕಾರವನ್ನು ಪಡೆಯುವುದು.
* ಆಶಾಕಿರಣ, ವಸತಿಯುತ, ವಸತಿರಹಿತ ಸೇತುಬಂಧ ಶಿಕ್ಷಣ ಕೇಂದ್ರಗಳಿಗೆ ಸಂಬಂಧಿಸಿದಂತೆ ದಾಖಲಾತಿ-ಹಾಜರಾತಿ ಕುರಿತು ನಿಖರ ಹಾಗೂ ವಿಶ್ವಸನೀಯ ಅಂಕಿ-ಅಂಶಗಳನ್ನು ಒದಗಿಸುವುದು.
* ಏಪ್ರಿಲ್ 14, 2009 ರಿಂದ ಬೇಸಿಗೆ ಪರಿಹಾರ ಬೋಧನೆ ಕ್ಯಾಂಪನ್ನು (ಖಣಟಟಜಡಿ ಖಜಟಜಜಚಿಟ ಅಚಿಟಠಿ) ಆರಂಭಿಸಿ, ಮೇ 19ಕ್ಕೆ ಅಂತ್ಯಗೊಳಿಸಲು ಹಾಗೂ ಕಡಿಮೆ ಅಂಕ ಪಡೆದ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಆಯ್ಕೆ ಮಾಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಪಾಲನೆ ಮಾಡುವುದು.
* ಜೂನ್ ತಿಂಗಳಲ್ಲಿ ಪರಿಹಾರ ಬೋಧನೆಯನ್ನು ನಡೆಸುವುದು.
*ಕೆ.ಜಿ.ಬಿ.ವಿ. ಶಾಲೆಗಳಲ್ಲಿ ಅಲ್ಪಸಂಖ್ಯಾತರ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಶೇ. 11 ರಷ್ಟು ಪ್ರಮಾಣದಲ್ಲಿ ಮಕ್ಕಳನ್ನು ಸೇರ್ಪಡೆ ಮಾಡಲು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.
*ಸಿವಿಲ್ ಕಾಮಗಾರಿಗೆ ಸಂಬಂಧಿಸಿದಂತೆ ಅಗತ್ಯ ಅನುದಾನವನ್ನು ಶಾಲಾ ಹಂತಕ್ಕೆ ಬಿಡುಗಡೆ ಮಾಡುವುದು ಹಾಗೂ ತ್ವರಿತವಾಗಿ ಕಾರ್ಯ ಪೂರ್ಣಗೊಳಿಸುವುದು.
*ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯ ಸೌಲಭ್ಯಗಳಾದ ವೈದ್ಯಕೀಯ ತಪಾಸಣೆ, ಗೃಹಾಧಾರಿತ ಶಿಕ್ಷಣ, ಸ್ವಯಂಸೇವಕರ ತರಬೇತಿ, ಸಾಧನ ಸಲಕರಣೆಗಳ ಪೂರೈಕೆ ಇತ್ಯಾದಿಗಳನ್ನು ತಕ್ಷಣ ಪೂರ್ಣಗೊಳಿಸುವುದು.
*ಡಯಟ್ ಮತ್ತು ಬಿ.ಆರ್.ಸಿ.ಗಳು, ಶಿಕ್ಷಕರಿಗೆ ಅಗತ್ಯ ಆಧಾರಿತ ತರಬೇತಿಗಳನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವುದು.*ಶಾಲಾ ಹಂತದಲ್ಲಿ ಬಿಡುಗಡೆ ಮಾಡಲಾದ ಶಿಕ್ಷಕರ ಅನುದಾನವನ್ನು ಸಂಬಂಧಿಸಿದ ಶಿಕ್ಷಕರಿಗೆ ಬಿಡುಗಡೆ ಮಾಡಿ, ಅಗತ್ಯ ಬೋಧನೆ ಕಲಿಕೆಯ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳುವುದು. ಈ ಕುರಿತು ಶಾಲಾ ಹಂತದ ಎಲ್ಲಾ ಅನುಸರಣೆಗಳ ಬಳಕೆಯನ್ನು ಕುರಿತು ಉಪಯೋಗಿತಾ ಪ್ರಮಾಣ ಪತ್ರವನ್ನು (ಗಅ) ಸಂಬಂಧಿಸಿದ ಕಛೇರಿಗಳಿಗೆ ಸಕಾಲದಲ್ಲಿ ಕಳುಹಿಸುವುದು.
*ಶಾಲೆ, ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತಗಳಲ್ಲಿ ಕ್ರಿಯಾಸಂಶೋಧನೆ, ಟಿ.ಎಲ್.ಎಂ. ಮೇಳ, ಮೆಟ್ರಿಕ್ ಮೇಳ, ವಿಚಾರಸಂಕಿರಣಗಳು, ಸಮಾಲೋಚನಾ ಸಭೆ ಇತ್ಯಾದಿಗಳನ್ನು ಸಕಾಲಿಕವಾಗಿ ಅನುಷ್ಠಾನಗೊಳಿಸಿ, ಫಲಶ್ರುತಿಗಳನ್ನು ಅನುಪಾಲನೆ ಮಾಡುವುದು.
ಈ ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ಶಿಕ್ಷಕರು, ಸಮುದಾಯ ಮತ್ತು ಎಲ್ಲಾ ಹಂತದ ಸಂಪನ್ಮೂಲ ವ್ಯಕ್ತಿಗಳು, ಉಸ್ತುವಾರಿ ಅಧಿಕಾರಿಗಳು, ಕ್ಷೇತ್ರ ಕಾರ್ಯಾನುಷ್ಠಾನಾಧಿಕಾರಿಗಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗಳು ಸದಸ್ಯರುಗಳು ಪೂರ್ಣ ಸಹಕಾರವನ್ನು ನೀಡುವುದರೊಂದಿಗೆ ಸಂಪೂರ್ಣ ಅನುಷ್ಠಾನ ಮತ್ತು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಗುರಿಯ ಸಾಧನೆಗೆ ಸಹಕರಿಸುವ ಮೂಲಕ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ.
No comments:
Post a Comment